ವೆಂಕಟ್ ಮಾವೀಸ್ ಲಾಂಛನದಲ್ಲಿ ವೆಂಕಟ್(ನಾಟಿಕೋಳಿ) ಅವರು ನಿರ್ಮಿಸುತ್ತಿರುವ ಹಾಗೂ ಶ್ರೀನಿವಾಸರಾಜು ನಿರ್ದೇಶಿಸುತ್ತಿರುವ ‘ದಂಡುಪಾಳ್ಯ ಭಾಗ ೨ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗಿದೆ. ಒಟ್ಟು ೨೫ ದಿನಗಳ ಕಾಲ ಬೆಂಗಳೂ ಸುತ್ತಮುತ್ತ ಎರಡನೇ ಹಂತದ ಚಿತ್ರೀಕರಣ ನಡೆಯಲಿದೆ.
ದಂಡುಪಾಳ್ಯ ಚಿತ್ರವನ್ನು ನಿರ್ದೇಶಿಸಿದ್ದಶ್ರೀನಿವಾಸರಾಜು ಅವರೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವೆಂಕಟ್ಪ್ರಸಾದ್ ಛಾಯಾಗ್ರಹಣ, ರವಿಚಂದ್ರನ್ ಸಂಕಲನ, ಹಾಗೂ ಪ್ರಭು ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಡಾ||ವಿ.ನಾಗೇಂದ್ರಪ್ರಸಾದ್ ಬರೆದಿದ್ದಾರೆ. ಪೂಜಾಗಾಂಧಿ, ಮಕರಂದ ದೇಶಪಾಂಡೆ, ರವಿಕಾಳೆ, ಕರಿಸುಬ್ಬು, ರವಿಶಂಕರ್, ಶ್ರುತಿ, ಸುಚೀಂದ್ರಪ್ರಸಾದ್, ಯತಿರಾಜ್, ಮುನಿ, ಡ್ಯಾನಿ, ಜಯದೇವ್, ಪೆಟ್ರೋಲ್ ಪ್ರಸನ್ನ, ಸಂಜನ ಮುಂತಾದವರಿದ್ದಾರೆ. ನಟಿ ಸಂಜನಾ ವಿಶೇಷಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.